ಭಾರತದ ಪುಣ್ಯಸಂಚಯದ ಗರ್ಭದಿಂದೆದ್ದ ಅನಘ್ರ್ಯ ರತ್ನ,
ಶತಮಾನಗಳ ಕತ್ತಲಿನಿಂದ ಸಿಡಿದೆದ್ದ ಪ್ರಜ್ವಲ ಬೆಳಕು ಪುಂಜ;
ಐಹಿಕದಲ್ಲಿದ್ದು ಐಹಿಕಮುಕ್ತ, ಸನ್ಯಾಸಿ, ಸ್ವಾಮಿ ವಿವೇಕಾನಂದ,
ವೇದಾಂತಗಳ ವಿವೇಕದ ಮೂರ್ತ ಪ್ರಾಂಜಲ ದಿವ್ಯ ರೂಪ.
...
ಮಳೆ, ನದಿ, ದಟ್ಟ ಕಾಡು
ಹುಟ್ಟಿಸಿದ ದಾತ ನೀನು,
ರಣ ರಣ ಬಿಸಿಲು ಕೊಟ್ಟು
ಮರುಭೂಮಿ ಜೊತೆಗೆ ಇಟ್ಟೆ.
...
ಚಂದ್ರ ಸೂರ್ಯರಂತೆ ಸ್ತ್ರೀ ಪುರುಷ ಮಧ್ಯೆ ಪ್ರೀತಿ,
ಜೀವ ಜೀವನದ ದಿವ್ಯ ಬೆಳಕು ಚೇತನದ ಶಕ್ತಿ;
ಮುಖಾಮುಖಿಯಾಗಿ ಪ್ರೀತಿ ಪ್ರತಿಫಲಿಸಿದ ಸಮಯ,
ಅದುವೆ ಹುಣ್ಣಿಮೆ, ಪೂರ್ಣಚಂದ್ರ, ಬೆಳದಿಂಗಳು.
...
ಮಳೆಯು ಬರುತಿದೆ, ನೋಡಿದಿರ, ಮಳೆಯು ಬರುತಿದೆ,
ಮೋಡದಿಂದ ಕೆಳಗೆ ಇಳಿದು, ಕಾಡು ನಾಡುಗಳನು ತೊಳೆದು,
ಹಚ್ಚಹಸುರು ಹೊದಿಕೆ ಹೊದಿಸಿ, ತಂಪು ಗಾಳಿ ಮೇಡಿಗಿಳಿಸಿ,
ಬಿಸಿಲು ಅಸುರನ ಒದ್ದೋಡಿಸಲು, ಮಳೆಯು ಬರುತಿದೆ,
...
ನಾವು ನೀವಿರುವ ಲೋಕ ದೊಡ್ಡ ಸರ್ಕಸ್ಸು,
ನಾವಾಡುವ ಭೂಮಿ ಸರ್ಕಸ್ಸು ಮೈದಾನ;
ಇಲ್ಲಿಲ್ಲದ ಪ್ರಾಣಿ ಜೀವಜಂತುಗಳಿಲ್ಲ,
ಎಲ್ಲವನಾಡಿಸುವವನೆ ರಂಗ ಮಾಲಿಕ, ವಿಧಿ;
...
ನೀನದೆಷ್ಟೆತ್ತರಕ್ಕೇರಿದರೇನು,
ನಿನ್ನುಗಮ ಅಣುವಿನಿಂದಲ್ಲವೇನು;
ನಿನ್ನಸ್ಥಿತ್ವದ ಕೀಲಿ ಕೈ ಅಣುರೇಣು,
ಕೊನೆಗೂ ಸೇರುವ ಗೂಡು, ಪರಮಾಣು.
...
ನೀನು ನೀನಾಗಿದ್ದರೆ ಲೋಕವೇ ನಿನಗುಂಟು,
ನಿನ್ನೊಳಗು ಬರಿದಾದರೆ ಎಲ್ಲವೂ ಬರಡು;
ನೀನೇ ನಿನ್ನಳವು, ನೀನೇ ನಿನ್ನಳಿವು,
ಉಳಿದುದೆಲ್ಲ ನಿನಗೆ ಉಡುಪು ಆಡಂಬರ.
...
ಮಟಮಟ ಮಧ್ಯಾಹ್ನದ ವೇಳೆ, ನಾಳೆ, ಬರುವೆನೆಂದಿದ್ದೆ,
ಹೇಳಿದ ಕಾಲಕ್ಕೆ ತಲಪುವ ಶ್ರದ್ಧೆ ನನಗೂ ಬಹಳವಿತ್ತು,
ಹೇಳಿದ ಕಾಲಕ್ಕೆ ಸ್ನಾನ ಊಟ ಮುಗಿಸಿ ಕಾಯುತ್ತಿದ್ದೆ;
ನಾನೇನೋ ಹೇಳಿದ್ದೆ, ಅದರಂತೆ ನಡೆಯಲೂ ಸಿದ್ಧನಿದ್ದೆ,
...
ನಡೆದಷ್ಟು ದೂರ ನಾನಿಟ್ಟಿರುವ ಧ್ಯೇಯ
ಮತ್ತಷ್ಟು ದೂರ ದೂರ ಓಡುತ್ತಿದೆಯಲ್ಲ;
ಕೈಗೆಟುಕುವಷ್ಟಿತ್ತು, ಒಂದು ಹೆಜ್ಜೆ ದೂರ -
ಹೆಜ್ಜೆಯಿಟ್ಟರೆ ಮರೀಚಿಕೆಯಾಯಿತಲ್ಲ.
...
ನೀನಾರೋ ನಾನಾರೋ, ನಾವೆಲ್ಲಿಂದ ಬಂದೆವೋ,
ಅದಾವ ಕಾಲಗರ್ಭದ ಕಾರ್ಯಕಾರಣ ಕವಲೊಡೆದು
ನಿನ್ನನನ್ನನಿಲ್ಲಿ ಅದಾವ ದಿವ್ಯ ಬಿಗಿತದಲಿ ಬಂಧಿಸಿತೋ.
...