PRAVEEN KUMAR Kannada Poems

PRAVEEN KUMAR Kannada Poems Poems

ಭಾರತದ ಪುಣ್ಯಸಂಚಯದ ಗರ್ಭದಿಂದೆದ್ದ ಅನಘ್ರ್ಯ ರತ್ನ,
ಶತಮಾನಗಳ ಕತ್ತಲಿನಿಂದ ಸಿಡಿದೆದ್ದ ಪ್ರಜ್ವಲ ಬೆಳಕು ಪುಂಜ;
ಐಹಿಕದಲ್ಲಿದ್ದು ಐಹಿಕಮುಕ್ತ, ಸನ್ಯಾಸಿ, ಸ್ವಾಮಿ ವಿವೇಕಾನಂದ,
ವೇದಾಂತಗಳ ವಿವೇಕದ ಮೂರ್ತ ಪ್ರಾಂಜಲ ದಿವ್ಯ ರೂಪ.
...

ಮಳೆ, ನದಿ, ದಟ್ಟ ಕಾಡು
ಹುಟ್ಟಿಸಿದ ದಾತ ನೀನು,
ರಣ ರಣ ಬಿಸಿಲು ಕೊಟ್ಟು
ಮರುಭೂಮಿ ಜೊತೆಗೆ ಇಟ್ಟೆ.
...

ಚಂದ್ರ ಸೂರ್ಯರಂತೆ ಸ್ತ್ರೀ ಪುರುಷ ಮಧ್ಯೆ ಪ್ರೀತಿ,
ಜೀವ ಜೀವನದ ದಿವ್ಯ ಬೆಳಕು ಚೇತನದ ಶಕ್ತಿ;
ಮುಖಾಮುಖಿಯಾಗಿ ಪ್ರೀತಿ ಪ್ರತಿಫಲಿಸಿದ ಸಮಯ,
ಅದುವೆ ಹುಣ್ಣಿಮೆ, ಪೂರ್ಣಚಂದ್ರ, ಬೆಳದಿಂಗಳು.
...

ಮಳೆಯು ಬರುತಿದೆ, ನೋಡಿದಿರ, ಮಳೆಯು ಬರುತಿದೆ,
ಮೋಡದಿಂದ ಕೆಳಗೆ ಇಳಿದು, ಕಾಡು ನಾಡುಗಳನು ತೊಳೆದು,
ಹಚ್ಚಹಸುರು ಹೊದಿಕೆ ಹೊದಿಸಿ, ತಂಪು ಗಾಳಿ ಮೇಡಿಗಿಳಿಸಿ,
ಬಿಸಿಲು ಅಸುರನ ಒದ್ದೋಡಿಸಲು, ಮಳೆಯು ಬರುತಿದೆ,
...

ನಾವು ನೀವಿರುವ ಲೋಕ ದೊಡ್ಡ ಸರ್ಕಸ್ಸು,
ನಾವಾಡುವ ಭೂಮಿ ಸರ್ಕಸ್ಸು ಮೈದಾನ;
ಇಲ್ಲಿಲ್ಲದ ಪ್ರಾಣಿ ಜೀವಜಂತುಗಳಿಲ್ಲ,
ಎಲ್ಲವನಾಡಿಸುವವನೆ ರಂಗ ಮಾಲಿಕ, ವಿಧಿ;
...

ನೀನದೆಷ್ಟೆತ್ತರಕ್ಕೇರಿದರೇನು,
ನಿನ್ನುಗಮ ಅಣುವಿನಿಂದಲ್ಲವೇನು;
ನಿನ್ನಸ್ಥಿತ್ವದ ಕೀಲಿ ಕೈ ಅಣುರೇಣು,
ಕೊನೆಗೂ ಸೇರುವ ಗೂಡು, ಪರಮಾಣು.
...

ನೀನು ನೀನಾಗಿದ್ದರೆ ಲೋಕವೇ ನಿನಗುಂಟು,
ನಿನ್ನೊಳಗು ಬರಿದಾದರೆ ಎಲ್ಲವೂ ಬರಡು;
ನೀನೇ ನಿನ್ನಳವು, ನೀನೇ ನಿನ್ನಳಿವು,
ಉಳಿದುದೆಲ್ಲ ನಿನಗೆ ಉಡುಪು ಆಡಂಬರ.
...

ಮಟಮಟ ಮಧ್ಯಾಹ್ನದ ವೇಳೆ, ನಾಳೆ, ಬರುವೆನೆಂದಿದ್ದೆ,
ಹೇಳಿದ ಕಾಲಕ್ಕೆ ತಲಪುವ ಶ್ರದ್ಧೆ ನನಗೂ ಬಹಳವಿತ್ತು,
ಹೇಳಿದ ಕಾಲಕ್ಕೆ ಸ್ನಾನ ಊಟ ಮುಗಿಸಿ ಕಾಯುತ್ತಿದ್ದೆ;
ನಾನೇನೋ ಹೇಳಿದ್ದೆ, ಅದರಂತೆ ನಡೆಯಲೂ ಸಿದ್ಧನಿದ್ದೆ,
...

ನಡೆದಷ್ಟು ದೂರ ನಾನಿಟ್ಟಿರುವ ಧ್ಯೇಯ
ಮತ್ತಷ್ಟು ದೂರ ದೂರ ಓಡುತ್ತಿದೆಯಲ್ಲ;
ಕೈಗೆಟುಕುವಷ್ಟಿತ್ತು, ಒಂದು ಹೆಜ್ಜೆ ದೂರ -
ಹೆಜ್ಜೆಯಿಟ್ಟರೆ ಮರೀಚಿಕೆಯಾಯಿತಲ್ಲ.
...

ನೀನಾರೋ ನಾನಾರೋ, ನಾವೆಲ್ಲಿಂದ ಬಂದೆವೋ,
ಅದಾವ ಕಾಲಗರ್ಭದ ಕಾರ್ಯಕಾರಣ ಕವಲೊಡೆದು
ನಿನ್ನನನ್ನನಿಲ್ಲಿ ಅದಾವ ದಿವ್ಯ ಬಿಗಿತದಲಿ ಬಂಧಿಸಿತೋ.
...

ನೀನು ನನ್ನವಳೆಂದು, ನಾನು ನಿನ್ನವನೆಂದು
ನಿನ್ನ ನನ್ನ ಹೃದಯ ಆತ್ಮಗಳು ಸಾರುತ್ತಿರುವಾಗ
ಅವರಿವರ ಹೊರ ಜಗತ್ತಿನ ಹಂಗೇಕೆ ನಮಗೆ?
ನೀನು ನನ್ನಲ್ಲಿ, ನಾನು ನಿನ್ನಲ್ಲಿ ಹುದುಗಿರುವಾಗ
...

ನಿನ್ನ ನಾನು, ನನ್ನ ನೀನು ಮರೆವುದೆಂದೂ ಸಾಧ್ಯವೆ?
ಕಣ್ಣು, ಬೆಳಕು ಒಂದನ್ನೊಂದು ಮರೆವುದೆಂದೂ ಸಾಧ್ಯವೆ?
ಸಾವಿರಾರು ವರುಷವೇಕೆ, ಕಾಲದಂಚಿನ ಹೊರಗೂ ನಾವು,
ನೀನು ನಾನು, ನಾನು ನೀನು ಒಬ್ಬರೊಬ್ಬರ ನೆನಪು ಹೆಣಿಗೆ ಬಿಚ್ಚಿ
...

ಚೆಲುವಿನ ಸುಂದರ ಹಂದರದಲ್ಲಿ
ಹಬ್ಬಿದ ಸುಂದರ ಬಳ್ಳಿಯು ನೀನು,
ಬಳ್ಳಿಯ ತಂಪಿನ ಆಸರೆಯಲ್ಲಿ
ದಣಿವನ್ನಾರಿಸೆ ಬಂದಿರುವೆ.
...

ಈ ದೂರ, ಬಹು ದೂರ, ಆ ತೀರ, ಈ ತೀರ,
ಅದ ಮೀರಿ ನಡೆಯುತ್ತಿದೆ ನಿನ್ನ ನನ್ನ ಲಲ್ಲೆ;
ಕಾಣಲಾರದ ಕೇಳಲಾರದ ನಮ್ಮ ವ್ಯವಹಾರ
ಆತ್ಮ ಸಂಗಮದಿಂದ ನಡೆಯುತ್ತಿದೆ, ನಲ್ಲೆ.
...

ನೆನಪಿನ ದೋಣಿಗೆ ಹಾಯಿಯ ಕಟ್ಟಿ
ಗತಕಾಲದ ತಟವನು ಸೇರುವ ಆಸೆ,
ಸಾಂಪ್ರತ - ಗತಿಸಿದ ದಿನಗಳ ಮಧ್ಯೆ
ನೆನಪಿನ ಸೇತುವೆ ಕಟ್ಟುವ ಆಸೆ.
...

ಅದೇನು ಹರುಷ, ಅದೇನು ಉಲ್ಲಾಸ
ನಿನ್ನ ನೆನೆಯುವಾಗ,
ಅದೇನು ಹುರುಪು, ಅದೇನು ಚೈತನ್ಯ
ನಿನ್ನೊಡನಿರುವಾಗ;
...

ನನ್ನ ಮನಸಿನಾಶೆಯಾಗಿ ಅವಳು ಬಂದು ನನ್ನ ಹಿಡಿದು
ನಲ್ಲನೆಂದು ಗಲ್ಲಹಿಡಿದು ಮೆಲ್ಲ ಮುತ್ತು ಬೆಲ್ಲ ಕೊಟ್ಟು
ಮುಖಕೆ ಮುಖವನಿಟ್ಟು ನಕ್ಕು ಉಸಿರುಗುಸಿರು ಬಿಸಿಯ ಬೆರೆಸಿ
ಎದೆಯ ಮೇಲೆ ಎದೆಯನಿಟ್ಟು ಪ್ರೇಮ ತಿದಿಯನೊತ್ತಿದಾಗ
...

ಅವಳೆದೆಯ ತೆರೆದು ಕೈತುಂಬ ಹಿಡಿದೆ,
ಹೊರ ಸುರಿದ ಭಾವುಕ ಸಿಹಿ ಜೇನು
ಮೈಕೈ ತುಂಬಿ, ಹರಿದು ಹರಿದು ತಂದಿತು ಮತ್ತು;
ಮಲ್ಲಿಗೆಯ ದೇಹ ಮತ್ತಷ್ಟು ಬೀಗಿ ಕೊಟ್ಟು
...

ನನ್ನ ಪ್ರಿಯ ನೆನಪು ನೀನು, ಎಷ್ಟು ದೂರವಿದ್ದರೇನು,
ನೀತಿ ನಡತೆ ಭೀತಿಯಿಂದ ದೂರ ದೂರ ಸರಿದರೇನು,
ದೀಪ-ಬೆಳಕು, ಹೂವು-ಗಂಧ, ಚಿನ್ನ-ಹೊಳಪು, ಭೂಮಿ-ಸೆಳೆತ
ಎಷ್ಟು ಕಾಲ ದೂರ ದೂರ ಹೀಗೆ ಬಿಟ್ಟು ಇರಲು ಸಾಧ್ಯ?
...

ಯಾಕೆ ನಿನ್ನ ಕಣ್ಣಿನಲ್ಲಿ ನನ್ನ ಕಂಡು ಇಷ್ಟು ಹೊಳಪು,
ಹಿಂದೆ ಎಂದು ಕಾಣದಂತ ಬಣ್ಣ, ಆಶೆ, ಕನಸು, ಹುರುಪು,
ಹೃದಯ ತುಂಬಿ ಉಕ್ಕಿ ಬಂದ ನಗುವು ನಿನ್ನ ಮುಖದ ಮೇಲೆ,
ದೇವರನ್ನೆ ಕಂಡ ತೃಪ್ತಿ ಶಾಂತಿ ನನ್ನ ಕಂಡ ಮೇಲೆ.
...

PRAVEEN KUMAR Kannada Poems Biography

PRAVEEN KUMAR with his more than three decades of government service at senior levels and as a poet of seventeen published collections and as an author of six volumes on matters of governance and administration is a familiar face in Indian intellectual circuits. His more than 30 contributions on governance and administration to prominent national dailies like The Hindu, Indian Express, Deccan Herald and Times of India and other periodicals and journals were extremely popular and often sensational by their innovative unorthodox thoughts. He retired from Government Service as a Senior Police Officer after 31 years of service that covered assignments as Director of Food and Civil Supplies Enforcement, Deputy Commissioner of Bangalore City, State Intelligence in charge of Foreigners, Coastal Security Police and various assignments in CID inter alia. Born in Mangalore as the eldest son of Shree R.D.Suvarna and Smt. B.Sarojini, Praveen Kumar graduated in Science from St. Aloysius College, Mangalore, going on to obtain post-graduate degree in Literature from Mysore University. He also holds post-graduate diploma in Business Management as well as Higher Diploma in Cooperative Management. He also attended six advanced courses at the National Police Academy, Hyderabad. His Poem, 'Justice' figures in Karnataka IX Standard Second Language English Text Book from the 2013-14 Academic Year.)

The Best Poem Of PRAVEEN KUMAR Kannada Poems

ಸ್ವಾಮಿ ವಿವೇಕಾನಂದರು

ಭಾರತದ ಪುಣ್ಯಸಂಚಯದ ಗರ್ಭದಿಂದೆದ್ದ ಅನಘ್ರ್ಯ ರತ್ನ,
ಶತಮಾನಗಳ ಕತ್ತಲಿನಿಂದ ಸಿಡಿದೆದ್ದ ಪ್ರಜ್ವಲ ಬೆಳಕು ಪುಂಜ;
ಐಹಿಕದಲ್ಲಿದ್ದು ಐಹಿಕಮುಕ್ತ, ಸನ್ಯಾಸಿ, ಸ್ವಾಮಿ ವಿವೇಕಾನಂದ,
ವೇದಾಂತಗಳ ವಿವೇಕದ ಮೂರ್ತ ಪ್ರಾಂಜಲ ದಿವ್ಯ ರೂಪ.

ಪರಮಹಂಸರ ಹಂಸಕ್ಷೀರ ಯೋಗಪ್ರಜ್ಞೆಯ ಪುಣ್ಯಫಲ,
ಶ್ರೀ ರಾಮಕೃಷ್ಣ ತಪಶ್ಚರ್ಯದಿಂದರಳಿದ ದಿವ್ಯಬಲ, ಛಲ;
ಸ್ವಾಮಿ ವಿವೇಕಾನಂದ ದೇಶ ನೈತಿಕಶಕ್ತಿಯ ನಿಜ ಸ್ವರೂಪ,
ನಿರ್ಭಯ ವಿಶ್ವಾಸದ ಪ್ರಜ್ವಲ ಆಧ್ಯಾತ್ಮಿಕತೆಯ ನಂದಾದೀಪ.

ಪರಕೀಯ ಝಳದಲ್ಲಿ ಆಧ್ಯಾತ್ಮಿಕ ಕ್ಷೀರ ಬತ್ತುತ್ತಿರುವಾಗ,
ಕ್ಷೀರಸಾಗರದಾಳಗಲಗಳ ವಿಶೇಶತೆಯ ಲೋಕಕ್ಕೆ ಬಿತ್ತರಿಸಿ,
ಭಾರತೀಯತೆಯ ಕೆಚ್ಚುನೆಚ್ಚಿನ ಮುಚ್ಚಳ ಬಿಚ್ಚಿತೋರಿಸಿದಾತ,
ಸ್ವಾಮಿ ಶ್ರೀ ನರೇಂದ್ರದತ್ತ, ಶ್ರೀ ರಾಮಕೃಷ್ಣರ ಪರಮ ಭಕ್ತ.

ಆಧ್ಯಾತ್ಮ ಜಡತೆಯಲ್ಲ, ಸಬಲತೆ; ಕ್ರಿಯೆಯಾಧ್ಯಾತ್ಮ ಗುಟ್ಟು,
ಅನುಭವದ ವಿದ್ವತ್ತೆ ನಮ್ಮನಿಮ್ಮ ಜೀವನದತ್ಯುನ್ನತ ಸೊತ್ತು;
ಈ ಲೋಕ ನೈತಿಕ ವ್ಯಾಯಾಮಶಾಲೆಯೆಂದಿಟ್ಟು ಕೊಟ್ಟು
ಕ್ರಿಯವಿಕಸನದ ಸೂತ್ರಸಾರ ಭಾರತದ ಮೂಲೆಮೂಲೆಗಿತ್ತ.

ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಮಂಡಲದೊಳಗೆ
ಸಿಡಿಲುಮಿಂಚಿನ ಬಿಗಿಸಂಕಲ್ಪಕ್ಕೆ ನಮಗೆ ಕರೆಕೊಟ್ಟನಾತ;
ಐಹಿಕ ತ್ಯಜಿಸಿ ಸನ್ಯಾಸಿ, ಭಾರತದ ಉದ್ದಗಲ, ಹೊರಗೆ,
ವೇದಾಂತದ ಚೈತನ್ಯ ದಿನರಾತ್ರಿ ಹಬ್ಬಿ ಅಲೆದಾಡಿದಾತ.

ಕಣ್ಣಮೇಲೆ ಕೈುಟ್ಟು ಕತ್ತಲೆಯೆಂದು ಕೂಗುವವರು ನಾವು,
ನಿರ್ಭಯತೆಯೆ ಸ್ವಾತಂತ್ರ್ಯ, ಭಯವು ಪಾಪನೈತಿಕತೆ, ಸಾವು;
ನೋಡಬೇಡ ಹಿಂದೆ, ನಡೆ ಮುಂದೆಯೆಂದು ಬೆಳಕನಿತ್ತ
ಹೊಸ ಪ್ರಜ್ಞೆ, ಹೊಸ ದಾರಿ ರೂವಾರಿ, ನರೇಂದ್ರನಾಥ ದತ್ತ.

ಒಂದೆ ವಿಶ್ವ, ವಿಶ್ವಕ್ಕೊಂದೆ ಆತ್ಮ, ಒಂದೆ ಅಸ್ಥಿತ್ವವೆಂದು
ಲೋಕ ಸಮಗ್ರತೆಯ ತತ್ವದಲಿ ಅವನು ಜಗತನೆಚ್ಚರಿಸಿದ;
ಆಧ್ಯಾತ್ಮ ಮಹತ್ತಿನತ್ತ ದೇಶವ ಪುನಹ ಪ್ರಚೋದಿಸಿದಾತ
ಹೊಸ ರಾಷ್ಟ್ರಪ್ರಜ್ಞೆಯ ದಿಕ್ಕಲ್ಲಿ ಭರತವರ್ಷವನುತ್ತೇಜಿಸಿದ.

ಆಧ್ಯಾತ್ಮ ಚೈತನ್ಯದ ಕ್ರಿಯಾಚಿಲುಮೆ, ನರೇಂದ್ರನಾಥ ದತ್ತ,
ನಿಶ್ಚೇಷ್ಟ ಪರಿಸರಕ್ಕೆ ಹೊಸಗಾಳಿ ಬೀಸಿ, ಹುರುಪನ್ನು ಕೊಟ್ಟ;
ಹೊಸದಿನದ ಮುಂಬೆಳಗು ತಂಪು ಚೈತನ್ಯ ಚೆಲ್ಲಿ ಹಬ್ಬಿ,
ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಗೆ ದಿಟ್ಟ ಅಡಿಪಾಯವನಿಟ್ಟ.

ಸ್ವಾಮಿ ವಿವೇಕಾನಂದರಿತ್ತ ಬೆಳಕೆಂದೂ ನಂದುವುದಿಲ್ಲ,
ಆಧ್ಯಾತ್ಮದ ಕ್ರಿಯಾವ್ಯಾಖ್ಯೆ ಐತಿಹ್ಯ ಮರೆಯುವಂತಹದಲ್ಲ;
ರಾಮಕೃಷ್ಣ ಪರಮಹಂಸ ಹೃದಯಾರವಿಂದದ ಈ ಬೆಳಕು
ಏರಿಳಿತದ ಮಧ್ಯೆ ಸದಾ ಭಾರತವ ನಡೆಸುವುದು ಮುಂದೆ.

PRAVEEN KUMAR Kannada Poems Comments

Close
Error Success