ಅಂತೂ ಇಂತೂ ಅಂಟು, ಎಂಟು, ಕಗ್ಗಂಟಾಯ್ತು! Poem by DR.DEEPAK VISWANATH

ಅಂತೂ ಇಂತೂ ಅಂಟು, ಎಂಟು, ಕಗ್ಗಂಟಾಯ್ತು!

ಧರ್ಮದ ದಂಟು,
ಜಾತಿಯ ಕಗ್ಗಂಟು..

ಭಾಷೆಯ ನಿಘಂಟು, ,
ಪಲಯನವಾದಿಗಳ ನಂಟು..

ಏರುತ್ತಿರುವ ವಿದ್ಯುತ್-ಕರೆಂಟು,
ತೀರಿಸಲಾಗದ ಮನೆ-ರೆಂಟು..

ನಿಧಾನವಾಗಿ ಬರೋ ಪೇಮೆಂಟು,
ಬರಿದಾಗುತ್ತಿರೋ ಗಂಟು..

ಸದಾ ಕಾಡೋ ಸಂಖ್ಯೆ ಎಂಟು,
ಕಾಪಾಡಲು ಎಲ್ಲಿದ್ದಾನೆ ರಾಮ-ಬಂಟು..

ಇನ್ನು ಸಾಕು ಕುಂಟು ನೆಪ,
ಮಾಡೋಣ ಸದಾ ಏಳುಕೊಂಡಲ ವಾಡನ ಜಪ,
ಭಕುತಿ ನಮ್ಮದು, ಶಕುತಿ ಅವನದ್ದು..

*ಶ್ರೀಕೃಷ್ಣಾರ್ಪಣಮಸ್ತು*

- ಡಾ.ದೀಪಕ ವಿಶ್ವನಾಥ

READ THIS POEM IN OTHER LANGUAGES
Close
Error Success